ತೇರದಾಳ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮವು ನ. 11ರಂದು ಜರುಗಲಿದೆ ಎಂದು ಸ್ಥಳೀಯ ಅಲ್ಲಮಪ್ರಭು ಸಭಾಭವನದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಬನಹಟ್ಟಿಯ ಹಿರೇಮಠ ಶರಣಬಸವದೇವರು, ಪ್ರವೀಣ ನಾಡಗೌಡ, ದೇವಲ ದೇಸಾಯಿ, ನಾಗಪ್ಪ ಸನದಿ, ದೇವಸ್ಥಾನ ಟ್ರಸ್ಟಿ ಗುಹೇಶ್ವರ ಪುರಾಣಿಕಮಠ ದೇವಸ್ಥಾನ ಅರ್ಚಕರು ಸೇರಿದಂತೆ ನೂರಾರು ಭಕ್ತರು ಇದ್ದರು.