ಭಗವಂತ ಒಲಿದರೆ ಎಲ್ಲವೂ ಸಾಧ್ಯ ಹಾಗಂತ ಅಮೃತವು ವಿಷವಾಗಲು ಸಾಧ್ಯವಿಲ್ಲ. ಪತ್ರಿಕಾ ವಿತರಕರು ಜನರಿಗೆ ಜ್ಞಾನ ಹಂಚುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಮುರುಘ ಮಠದ ಅನುಭವ ಮಂಟಪದಲ್ಲಿ ನಡೆದ ರಾಜ್ಯಮಟ್ಟದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು. ಆಗಮಿಸಿದ ವೇಳೆ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.