ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದೇವೆ. ಯಾರು, ಯಾವುದೇ ಮಾಹಿತಿ ನೀಡಬೇಕಾದ್ರೂ ಆಯೋಗದ ಮುಂದೆ ಹೋಗಬಹುದು. ತನಿಖೆಗಾಗಿಯೇ ಆಯೋಗ ರಚನೆ ಆಗಿರುವುದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಮುಡಾದಲ್ಲಿ ಏನೇನು ಅಕ್ರಮ ಆಗಿದೆಯೋ ಅದಕ್ಕೆ ತನಿಖೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.