ರಾಜ್ಯದಲ್ಲಿ ಕಳೆದ ಬರಪರಿಹಾರಕ್ಕಾಗಿ ಕೇಂದ್ರಕ್ಕೆ 36 ಸಾವಿರ ಕೋಟಿ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದ್ದೆವು. ದೆಹಲಿಗೆ ಹೋಗಿ ಪ್ರತಿಭಟನೆಯನ್ನೂ ಸಹ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ಸಿದೆ ಎಂಬ ಕಾರಣಕ್ಕೆ ಅನುದಾನವನ್ನು ನೀಡದೆ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸಿ ಕೇವಲ 3. 254 ಕೋಟಿ ಹಣ ನೀಡಿದರು, ಈಗ ಅತಿವೃಷ್ಟಿ ನಿರ್ವಹಣೆ ನಾವು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸಮ್ಮರ್ಪಕ ಅನುದಾನ ನೀಡಬೇಕು ಎಂದು ಸಚಿವ ಪರಮೇಶ್ವರ್ ಮಾಧ್ಯಮಕ್ಕೆ ತಿಳಿಸಿದ್ದಾರೆ