ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಾಲಯದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆಂದೋಲಾ ಸ್ವಾಮಿಗಳು ಮಾಡಿರುವ ಆರೋಪನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ರೇವಣಸಿದ್ದಪ್ಪಾ ಸಾತನೂರ ಅವರು ತಿಳಿಸಿದರು.
ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಾಲಯದ ಜೀರ್ಣೋಧ್ದಾರ ಮಾದರಿಯಲ್ಲೆ ಚಿತ್ತಾಪುರ ತಾಲೂಕಿನ ರೇವಗ್ಗಿ ಗುಡ್ಡದ ಶ್ರೀ ರೇವಣಸಿದ್ದೇಶ್ವರ ದೇವಾಲಯವನ್ನು ತೆಗ್ಗಳ್ಳಿಯವರು ಅತ್ಯಂತ ಮುತುವರ್ಜಿ ವಹಿಸಿ ಜೀರ್ಣೋದ್ಧಾರಗೊಳಿಸಿದ್ದಾರೆ. ಈ ಜೀರ್ಣೋಧ್ದಾರದ ಭಾಗವಾಗಿ ಐವತ್ತೊಂದು ಅಡಿ ಎತ್ತರದ ರೇವಣಸಿದ್ದೇಶ್ವರ ಮೂರ್ತಿ ಸ್ಥಾಪನೆ , ಕಲ್ಯಾಣ ಮಂಟಪದ ಎರಡನೇ ಅಂತಸ್ತಿನ ನಿರ್ಮಾಣ, ರೇವಗ್ಗಿ ಗುಡ್ಡದ ಮೇಲಿರುವ ದೇವಾಲಯಕ್ಕೆ ಗುಣಮಟ್ಟದ ದಾರಿ ನಿರ್ಮಾಣ , ಪಾರ್ಕಿಂಗ್ ವ್ಯವಸ್ಥೆ, ಉದ್ಯಾನವನ ಹಾಗೂ ಶಿವ ಮಂದಿರ ನಿರ್ಮಾಣದ ಜೊತೆಗೆ ದೇವಾಲಯದ ಆವರಣದಲ್ಲಿರುವ ಐತಿಹಾಸಿಕ ಬಾವಿಯ ಜೀರ್ಣೋದ್ದಾರ ಕಾರ್ಯ ಕೈಗೊಂಡು ದೇವಾಲಯದ ಸೌಂದರ್ಯ ಹೆಚ್ಚಿಸುವಲ್ಲಿ ತೆಗ್ಗಳ್ಳಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.





