ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುಣಾವಣೆ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸ್ಥಳಿಯ ಶಾಸಕರ ನಿರ್ಲಕ್ಷವೇ ಕಾರಣ ಎಂದು ಅರ್ಜುನ ಭದ್ರೆ ಅವರು ಹೇಳಿದರು.
ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಅರಳಗುಂಡಗಿ ಗ್ರಾಮ ಪಂಚಾಯತಿ ಯಲ್ಲಿ ಇಪ್ಪತೈದು ಜನ ಸದ್ಯರಿದ್ದು ನಾಲ್ಕು ಜನ ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ ಅದರಲ್ಲಿ ಅದ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಯ ಸಪ್ನಾ ಗಂಡ ನಿಂಗರಾಜ ಕಡಿ ಅವರು ಸ್ಪರ್ದಿಸಿದ್ದರು, ಶ್ರೀಮತಿ ಸಪ್ನಾ ಅವರು ಸ್ಪರ್ದಿಸಬಾರದೆಂದು ಶರಣಗೌಡ ಇವರ ಗುಂಪು ಮನೆಗೆ ಹೊಗಿ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ. ಹಾಗೆಯೆ ಜಾತಿ ನಿಂದನೆ ಮಾಡಿದ್ದಾರೆ, ಮತ್ತು ಚುಣಾವಣೆ ಮುಗಿದು ಸಪ್ನಾ ಅವರು ಆರಿಸಿ ಬಂದಮೇಲೂ ಅವರ ಮನೆಗೆ ಹೋಗಿ ಹೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.





