ಗಾಣಿಗ ಸಮಾಜ ಯುವ ಘಟಕ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಾ ವತಿಯಂದ ಜಂಟಿ ಪತ್ರಿಕಾ ಗೋಷ್ಟಿ ನಡೆಸಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸುವ ಕುರಿತು ಸುದ್ದಿಗೋಷ್ಟಿ ನಡೆಸಲಾಯಿತು.
ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಗಾಣಿಗ ಸಮಾಜದ ಜೇವರ್ಗಿ ತಾಲೂಕಾ ಅಧ್ಯಕ್ಷ ಸುರೇಶ ಪಾಟೀಲ್ ನೇದಲಗಿ ಮಾತನಾಡಿ ಗಾಣಿಗ ಸಮಾಜ ಯುವ ಘಟಕ ಜೇವರ್ಗಿ ಮತ್ತು ಯಡ್ರಾಮಿ ಘಟಕದ ಸಹಯೋಗದಲ್ಲಿ ಗಾಣಿಗ ಸಮಾಜದ ಜೇವರ್ಗಿ ತಾಲೂಕಾ ಮತ್ತು ಯಡ್ರಾಮಿ ತಾಲೂಕಿನ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅದರೊಟ್ಟಿಗೆ ವಿಶೇಷ ಸಾಧನೆಗೈದ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.





