ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಕಲಬುರಗಿ ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟ, ಕಲಬುರಗಿ ಇವರುಗಳ ಸಹಯೋಗದಲ್ಲಿ ಜರುಗಿದ ಕೊನೆಯ ದಿನ ಕಾರ್ಯಕ್ರಮವು ನಗರೇಶ್ವರ ಶಾಲೆಯಿಂದ ಶುರುವಾಗಿ ಬಸವಣ್ಣನವರ ವರ್ಣರಂಜಿತ ಭಾವಚಿತ್ರ ಹಾಗೂ ಸರ್ವ ಶರಣರ ಭಾವಚಿತ್ರಗಳೊಂದಿಗೆ ವಚನ ನೃತ್ಯ, ವಚನ ಗಾಯನ, ಕೋಲಾಟ, ಜಾನಪದ ಕಲಾವಿದರೊಳಗೊಂಡ ಭವ್ಯ ಮೆರವಣಿಗೆಯು ಕಿರಾಣಾ ಬಜಾರ ಮಾರ್ಗವಾಗಿ ಸೂಪರ್ ಮಾರ್ಕೇಟ್ ನಿಂದ ಜಗತ್ ವೃತ್ತದ ಬಸವೇಶ್ವರ ಮೂರ್ತಿ ಆವರಣದಲ್ಲಿ ಮಂಗಲಗೊಂಡಿತು. ಈ ಕಾರ್ಯಕ್ರಮದಲ್ಲಿ ಹಲವರು ಉಪಸ್ಥಿತರಿದ್ದರು.





