ರಾಜ್ಯದಲ್ಲಿನ ಸಿ ಎಂ ಬದಲಾವಣೆ ವಿಚಾರವನ್ನ ಕರ್ನಾಟಕ ಪ್ರಧೇಶ ಕುರುಬರ ಸಂಘ ಖಂಡಿಸಿ ಸಿದ್ದರಾಮಯ್ಯಾನವರು ಮುಂದೆ ಸಿ ಎಂ ಸ್ಥಾನದಲ್ಲಿ ಮುಂದುವರೆಸಲು ಆಗ್ರಹಿಸಲಾಗಿದೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗ ಶೇ 70% ರಿಂದ 80% ರಷ್ಟು ಜನರು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿದ ಕಾರಣ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದು ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಮುಖ್ಯ ಮಂತ್ರಿಗಳಾಗಿರುತ್ತಾರೆ. ಮಾನ್ಯ ಸಿದ್ದರಾಮಯ್ಯರವರು ಮುಖ್ಯ ಮಂತ್ರಿಗಳಾಗುವ ಸಂದರ್ಭದಲ್ಲಿ 30 ತಿಂಗಳ ಅವಧಿಯ ನಂತರ ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುತ್ತೇವೆಂದು ಸಾರ್ವಜನಿಕವಾಗಿ ಕಾಂಗ್ರೇಸ್ ಪಕ್ಷದ ಹೈಕಮಾಂಡ್ ಯಾರಿಗೂ ತಿಳಿಸಿರುವುದಿಲ್ಲ. ಆದ್ದರಿಂದ ಮಾನ್ಯ ಸಿದ್ದರಾಮಯ್ಯರವರೇ 5 ವರ್ಷಗೂ ಅವಧಿಗೆ ಮುಖ್ಯಮಂತ್ರಿಗಳಾಗಿ ಮುಂದುವರೆ ಯಬೇಕು ಎಂಬುದು ಎಲ್ಲಾ ಹಿಂದುಳಿದ ಜನಾಂಗಗಳ ವತಿಯಿಂದ ಒತ್ತಾಯಿಸಲಾಗಿದೆ