ಯಾದಗಿರಿ ಭೀಮಾನದಿ ಪ್ರವಾಹ ತಗ್ಗಿದ ನಂತರ ಅನ್ನದಾತರ ಸಂಕಷ್ಟ, ಭೀಮಾನದಿ ಪ್ರವಾಹಕ್ಕೆ ಕೊಚ್ಚಿಹೊಯ್ತು ಫಲವತ್ತಾದ ಮಣ್ಣು, ಅದೆ ರೀತಿ ಫಸಲು ಬಂದ ಭತ್ತ ಹಾನಿ, ಪೈಪ್ ಲೈನ್ ಕೂಡ ಕೊಚ್ಚಿಕೊಂಡು ಹೋಗಿ ಹಾನಿ, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಂದಳ್ಳಿ ಗ್ರಾಮದ ಅನ್ನದಾತರ ಕಂಗಾಲು, ತೆನೆ ಕಟ್ಟಿದ್ದ ಭತ್ತದ ಬೆಳೆ ಕೊಳೆತು ಹಾನಿ, ಎಕರೆಗೆ 60 ಸಾವಿರ ಖರ್ಚು ಮಾಡಿದ ಬೆಳೆ ನಾಶ, ಫಲವತ್ತಾದ ಮಣ್ಣು ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಹಿನ್ನಲೆ ಅನ್ನದಾತರ ಕಣ್ಣೀರು, ಎಕರೆಗೆ ಹೆಚ್ಚಿನ ಪರಿಹಾರ ನೀಡುವಂತೆ ರೈತರ ಆಗ್ರಹ, ಫಲವತ್ತಾದ ಮಣ್ಣು ಹಾಗೂ ಬೆಳೆ ಹಾನಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಥಿತಿ ಬಂದಿದೆ ಎಂದ ರೈತ