ಕಲಬುರಗಿ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಿಸಬೇಕೆಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಆಗ್ರಹಿಸಿದರು ಸೇಡಂ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ ಸಂಪೂರ್ಣ ಬೆಳೆ ಹಾನಿಯಾಗಿದ್ದು ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಿಸಿ ಸರಕಾರ ಬೇಗನೆ ರೈತರ ಖಾತೆಗೆ ಪರಿಹಾರ ಹಣ ನೀಡಬೇಕೆಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಆಗ್ರಹಿಸಿದರು ಪಟಣದ ಚಿಂಚೋಳಿ ವೃತ್ತದ ಹತ್ತಿರ ಭಾರತೀಯ ಜನತಾ ಪಕ್ಷದಿಂದ ಸರಕಾರದ ವಿರುದ್ದ ಪ್ರತಿಭಟನೆ ಹೋರಾಟದಲ್ಲಿ ಮಾತನಾಡಿ ಮುಂಗಾರು ಬೆಳೆಗಳಾದ ಹೆಸರು ,ಉದ್ದು ,ತೊಗರೆ ಬೆಳೆಗಳು ಹಾಳಾಗಿವೆ ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು ಮನೆ ಹಾನಿಗೆ 2.5 ಲಕ್ಷ ರೂಪಾಯಿ, ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ, ಬೆಳೆ ಹಾನಿ ಒಂದು ಎಕರೆಗೆ 50v ಸಾವಿರ ರೂಪಾಯಿ ಪರಹಾರ ನೀಡಬೇಕು. ಡಿಸಿಸಿ ಬ್ಯಾಂಕ್ ಮೂಲಕ ಜಿಲ್ಲೆಯ ರೈತರಿಗೆ 5 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ನೀಡಬೇಕು ಸಚಿವ ಡಾ ಶರಣಪ್ರಕಾಶ ಪಾಟೀಲ ಅವರ ಮನೆಯ ಆಳಿನಂತೆ ವರ್ತನೆ ತೋರುತ್ತಿರುವ ಸಹಕಾರ ಸಂಘಗಳ ಉಪ- ನಿಬಂದಕರನ್ನು ಕೂಡಲೇ ಅಮಾನತುಗೊಳಿಸಬೇಕು ಅಮಾನತು ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ಬಿಜೆಪಿ ಮಂಡಲ ಅದ್ಯಕ್ಷ ಶರಣು ಮೆಡಿಕಲ್,ಸಿದ್ದು ಬಾನರ್, ವಿರೇಶ ಹೂಗಾರ, ರಾಘವೇಂದ್ರ ಮೆಕಾನಿಕ್, ತಿರುಪತಿ ಶಹಾಬಾದಕರ್, ಮಹಾದೇವಪ್ಪ ಗೋಣಿ, ಸೂಗಪ್ಪ ಬಳಗಾರ ರಂಜೋಳ, ಮಲ್ಲಿಕಾರ್ಜುನ ಸ್ವಾಮಿ ಬಿಬ್ಬಳ್ಳಿ ಇನ್ನೂ ಅನೇಕ ಬಿಜೆಪಿ ಕಾರ್ಯಕರ್ತರು ವಾಗ್ದಾರಿ- ರೆಬ್ಬನಪಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು 2 ಗಂಟೆಗೂ ಕಾಲ ಸಂಚಾರ ಸ್ಥಗಿತಗೊಂಡಿತು ವಾಹನ ಸವಾರರು ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಆಗಮಿಸಿದ್ದ ಸಹಾಯಕ ಆಯುಕ್ತ ಪ್ರಭುರೆಡ್ಡಿ,ತಹಶಿಲ್ದಾರ ಶ್ರೀಯಾಂಕ ಧನಶ್ರೀ, ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಶರಣಪ್ಪ ಎಳ್ಳಿ ssvtv news ಸೇಡಂ