Google search engine
ಮನೆUncategorizedಅಲ್ಲೊಬ್ಬರು ವಿಚಿತ್ರ ಪ್ರಾಣಿ ಇದ್ದಾರೆ, ನಮ್ಮ ಪ್ರಧಾನಿಯವರ ಡೈನಾಮಿಕ್ ನಿರ್ಧಾರದಿಂದ ಸರಿಯಾದ ದಾರಿಗೆ ಬರುತ್ತಿದ್ದಾರೆ

ಅಲ್ಲೊಬ್ಬರು ವಿಚಿತ್ರ ಪ್ರಾಣಿ ಇದ್ದಾರೆ, ನಮ್ಮ ಪ್ರಧಾನಿಯವರ ಡೈನಾಮಿಕ್ ನಿರ್ಧಾರದಿಂದ ಸರಿಯಾದ ದಾರಿಗೆ ಬರುತ್ತಿದ್ದಾರೆ

ಅಲ್ಲೊಬ್ಬರು ವಿಚಿತ್ರ ಪ್ರಾಣಿ ಇದ್ದಾರೆ, ನಮ್ಮ ಪ್ರಧಾನಿಯವರ ಡೈನಾಮಿಕ್ ನಿರ್ಧಾರದಿಂದ ಸರಿಯಾದ ದಾರಿಗೆ ಬರುತ್ತಿದ್ದಾರೆ

ಅಲ್ಲೊಬ್ಬರು ವಿಚಿತ್ರ ಪ್ರಾಣಿ ಇದ್ದಾರೆ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಡೈನಾಮಿಕ್ ನಿರ್ಧಾರದಿಂದ ಸರಿಯಾದ ದಾರಿಗೆ ಬರುತ್ತಿದ್ದಾರೆ ಎಂದು, ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ವ್ಯಂಗ್ಯವಾಡಿದ್ದಾರೆ ” ನಮ್ಮ ಪ್ರಧಾನಿಯವರು ಚೀನಾ, ಜಪಾನ್ ದೇಶಕ್ಕೆ ಹೋಗಿ ವ್ಯಾಪಾರ ಮಾಡಿಕೊಂಡು ಬಂದರು. ಎಲ್ಲರೂ ಒಂದಾದರು, ಅದನ್ನು ನೋಡಿದ ಕೂಡಲೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟ್ವೀಟ್ ಮಾಡಿ, ಮೋದಿ ನನ್ನ ಆತ್ಮೀಯ ಸ್ನೇಹಿತ ಎಂದು ಹೇಳುತ್ತಿದ್ದಾರೆ. ಅದೇ ರೀತಿ, ನಮ್ಮಲ್ಲೂ ಒಂದು ವಿಚಿತ್ರ ಪ್ರಾಣಿಯಿದೆ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆನಮ್ಮಲ್ಲೂ ಅದೇ ರೀತಿಯ ವಿಚಿತ್ರ ಪ್ರಾಣಿಯಿದೆ, ಅದು ಆಲೂಗೆಡ್ಡೆಯಿಂದ ಬಂಗಾರವನ್ನು ಉತ್ಪಾದಿಸುತ್ತದೆ. ಒಂದು ಕಡೆ ಬಟಾಟೆ ಹಾಕುವುದಂತೆ, ಇನ್ನೊಂದು ಕಡೆಯಿಂದ ಬಂಗಾರು ತೆಗೆಯುವುದಂತೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ದ, ಯತ್ನಾಳ್ ಲೇವಡಿ ಮಾಡಿದ್ದಾರೆಹರ್ಯಾಣದಲ್ಲಿ ಜಿಲೇಬಿ ಮಾಡುವ ಫ್ಯಾಕ್ಟರಿಯ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿದ್ದರು. ಹರ್ಯಾಣದಲ್ಲಿ ಅವರ ಮಾತನ್ನು ಕೇಳಿ, ಮತದಾರರು ಕಾಂಗ್ರೆಸ್ ಅನ್ನು ಸೋಲಿಸಿದರು. 2029ರಲ್ಲೂ ಮೋದಿಯವರೇ ಪ್ರಧಾನಿಯಾಗುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್, ಭವಿಷ್ಯವನ್ನು ನುಡಿದಿದ್ದಾರೆಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಏನಾದರೂ ಅವರ ಜಾಗಕ್ಕೆ ಬಂದರೆ, ಹಿಂದೂ ಕಾ ಸಾಥ್, ಹಿಂದೂ ಕಾ ಸಹಕಾರ್ ಎಂದು ಹೇಳುತ್ತಾರೆ. ಸಂತೋಷ್ ಲಾಡ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯದಲ್ಲಿ ಹುಟ್ಟಿ ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ ಎಂದು ಯತ್ನಾಳ್, ಸಲಹೆಯನ್ನು ನೀಡಿದ್ದಾರೆನಾವೆಲ್ಲಾ ಹಿಂದೂಗಳು ಒಂದಾಗಬೇಕು, ನಮ್ಮನಮ್ಮಲ್ಲಿ ಜಗಳ, ಜಾತಿ ವಿಚಾರ ಇನ್ನು ಮುಂದೆ ಮಾಡುವುದು ಬೇಡ. ನಮ್ಮ ಶ್ರೇಷ್ಠ ಧರ್ಮಕ್ಕೆ ಏನಾದರೂ ತೊಂದರೆ ಬಂದರೆ, ಈಗ ಹೇಗೆ ನಾವೆಲ್ಲಾ ಒಂದಾಗಿದ್ದೇವೆ ಅಲ್ಲವೇ, ಅದೇ ರೀತಿ ಒಗ್ಗಟ್ಟಾಗಿರಬೇಕು ಎಂದು ಯತ್ನಾಳ್, ಮನವಿಯನ್ನು ಮಾಡಿದ್ದಾರೆಹಿಂದೂಗಳ ತಂಟೆಗೆ ಸಿದ್ದರಾಮಯ್ಯ ಸರ್ಕಾರ ಬರಬಾರದು, ಇಷ್ಟಕ್ಕೇ ನಿಂತರೆ ಕೊನೇ ಪಕ್ಷ 2028ರ ವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೆ. ಇಲ್ಲದಿದ್ದರೆ ಅದಕ್ಕಿಂತ ಮುಂಚೆಯೇ ಸರ್ಕಾರ ಬಿದ್ದರೂ ಬೀಳಬಹುದು. ಡಿಕೆ ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ಪಟ್ಟಿದ್ದಾರೆ ಧರ್ಮ ಮತ್ತು ಅಭಿವೃದ್ದಿ ಎರಡೂ ಬೇಕು, ಹಾಗಾಗಿ ನಮ್ಮಲ್ಲಿ ಒಗ್ಗಟ್ಟು ಅಗತ್ಯ. ಮದ್ದೂರು, ನಾಗಮಂಗಲ ಮುಂತಾದ ಕಡೆ ನಡೆದ ಘಟನೆಗಳು ಮರುಕಳಿಸಬಾರದು. ಇದಕ್ಕಾಗಿ ನಾವೆಲ್ಲಾ ಒಂದಾಗಬೇಕು ಎಂದು ಯತ್ನಾಳ್ ಹೇಳಿದ್ದಾರೆ. ಆ ಮೂಲಕ, ಗಣೇಶ ವಿಸರ್ಜನೆಯ ವೇಳೆ ನಡೆದ ವಿದ್ಯಮಾನಕ್ಕೆ ಕಿಡಿಕಾರಿದರು ಉತ್ತರ ಕರ್ನಾಟಕದ ಹೆಬ್ಬಾಗಿಲು ಏಲಕ್ಕಿ ಕಂಪಿನ ನಗರ ಹಾವೇರಿಯ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಶ್ರೀ ಗಜಾನನ ಯುವಕ ಮಂಡಳಿ ವತಿಯಿಂದ ಹಾವೇರಿ ಹಿಂದೂ ಮಹಾಗಣಪತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಸಹಸ್ರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು, ಗಣೇಶ ಭಕ್ತರು, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದೆ ಎಂದು ಯತ್ನಾಳ್, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!