ಬೆಳೆಯುತ್ತಿರುವ ಕಲಬುರಗಿ ಮಹಾನಗರದಲ್ಲಿ ಟ್ರಾಫಿಕ್ ಜಾಮ್ ಸುಧಾರಣೆ ಹಾಗೂ ಮಾಲ್, ಬಾರ್, ಆಸ್ಪತ್ರೆ, ನಗರದ ಪ್ರಮುಖ ದೊಡ್ಡ ಪ್ರಮಾಣದ ಕಾಂಪ್ಲೆಕ್ಸ್’ಗಳಲ್ಲಿ ಸ್ಥಳ ನಿಲುಗಡೆ ಅವೈಜ್ಞಾನಿಕವಾಗಿದ್ದೂ, ಅದನ್ನು ಸುಧಾರಿಸಿ ವೈಜ್ಞಾನಿಕವಾಗಿ ಮಾಡಬೇಕೆಂದು ಗುರು ಬಂಡಿ ಒತ್ತಾಯಿಸಿದ್ದಾರೆ.
ನಗರದಲ್ಲಿನ ಪತ್ರಿಕಾ ಭವನದಲ್ಲಿ ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ ಮಾತನಾಡಿದ ಅವರು ಏಷಿಯನ್ ಮಾಲ್, ಕಂದೂರ್ಮಾಲ್, ಆರ್ಚಿಡ್ ಮಾಲ್ ಸೇರಿದಂತೆ ನರದಲ್ಲಿನ ಆಸ್ಪತ್ರೆ, ಬಾರ್, ದೊಡ್ಡ ಮತ್ತು ಚಿಕ್ಕ ಪ್ರಮಾಣದ ಕಾಂಪ್ಲೆಕ್ಸ್’ಗಳಲ್ಲಿ ವಾಹನಗಳ ನಿಲುಗಡೆ ಸರಿಯಾಗಿ ರೀತಿಯಲ್ಲಿ ವ್ಯವಸ್ಥೆ ಇರುವುದಿಲ್ಲ. ಇದು ಅವೈಜ್ಞಾನಿಕವಾಗಿದ್ದೂ, ಇದಕ್ಕೆ ಮಹಾನಗರ ಪಾಲಿಕೆಯವರು ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ನಿರ್ಲಕ್ಷ ವಹಿಸಿರುತ್ತಾರೆ ಹಾಗೂ ಪರವಾನಿಗೆ ನೀಡುವಲ್ಲಿ ಸ್ಥಳ ಪರಿಶೀಲನೆ ಮಾಡದೇ ಪರವಾನಿಗೆ ನೀಡಿರುವುದು ಇದಕ್ಕೆ ಕಾರಣವಾಗಿದ್ದೂ, ಆದಷ್ಟು ಬೇಗ ಇದರ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.





