ಶಾಸಕ ಅವಿನಾಶ್ ಜಾಧವಗೆ ಅನುಭವ ಕಡಿಮೆ ಇದ್ದು ಶಾಸಕರ ಹಕ್ಕು, ಕರ್ತವ್ಯಗಳಾದರೂ ಮೊದಲು ತಿಳಿದುಕೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ್ ರಾಠೋಡ್ ಹೇಳಿದರು.
ತಾಲೂಕಿನ ಚಂದಾಪುರ ಪಟ್ಟಣದಲ್ಲಿ ಪತ್ರಿಕಾಗೋಸ್ಟಿಯಲ್ಲಿ ಮಾತನಾಡಿದ ಅವರು ಚಿಂಚೋಳಿ ತಾಲೂಕಿನ ಅಭಿವೃದ್ಧಿ ಕುಂಟಿತ ಗೊಂಡಿದ್ದು ಉಮೇಶ್ ಜಾಧವ ಅವರಿಂದ ಹೊರತು ಜಿಲ್ಲಾ ಉಸ್ತಾವರಿ ಸಚಿವರಿಂದಲ್ಲ ಎಂದರು. ಅಭಿವೃದ್ಧಿ ಎಂದರೆ ಏನು ಎಂದು ತಿಳಿದುಕೊಳ್ಳಲು ಚಿತ್ತಾಪುರ ಗೆ ಭೇಟಿ ನೀಡಿ ಎಂದು ಶಾಸಕ ಅವಿನಾಶ್ ಜಾಧವ ಗೆ ಟಾಂಗ್ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಲಕ್ಶ್ಮಣ ಅವುಂಟಿ, ಅಬ್ದುಲ್ ಬಸಿದ್, ಸುರೇಶ ಬಂಟ, ಆನಂದ್ ಟೈಗರ್ ಇನ್ನಿತರ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು





