ಕಲಬುರಗಿ ನಗರದಲ್ಲಿನ ಮುಖ್ಯ ರಸ್ತೆಗಳಾದ ಸುಪರ ಮಾರ್ಕೇಟ್, ರಾಮ ಮಂದಿರ ರಸ್ತೆ, ಸಾಯಿ ಮಂದಿರ ರಸ್ತೆ ಸೇರಿದಂತೆ ಇನ್ನೂ ಹಲವು ರಸ್ತೆಗಳು ಚಿಕ್ಕದಾಗಿದ್ದು ಇದರಿಂದ ಜನರಿಗೆ ಓಡಾಡಲು ತೊಂದರೆ ಹಾಗೂ ವಾಹನ ಅಪಘಾತಗಳಾಗುತ್ತಿರುವುದರಿಂದ ರಸ್ತೆಗಳನ್ನು ಅಗಲೀಕಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಂದು ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಜೈ ಕನ್ನಡಿಗರ ಸೇನೆ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ರಸ್ತೆ ಅಗಲೀಕರಣದ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಲಬುರಗಿ ನಗರದಲ್ಲಿನ ಮುಖ್ಯ ರಸ್ತೆಗಳಾದ ಸುಪರ ಮಾರ್ಕೇಟ್, ರಾಮ ಮಂದಿರ ರಸ್ತೆ, ಸಾಯಿ ಮಂದಿರ ರಸ್ತೆ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ ಜಗತ್ ಬಿಗ್ ಬಜಾರ್ ರಸ್ತೆ, ದರ್ಗಾ ರಸ್ತೆ, ಬಂಬೂ ಬಜಾರ ರಸ್ತೆಗಳು ಸೇರಿದಂತೆ ಇನ್ನೂ ಹಲವಾರು ಕಡೆಯ ರಸ್ತೆಗಳು ಚಿಕ್ಕದಾಗಿದ್ದು ಜನರಿಗೆ ಓಡಾಡಲು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಮನವಿ ಸಲ್ಲಿಸಲಾಯಿತು.





