ಉಡುಪಿಯ ಅಜ್ಜರಕಾಡು ಬಳಿ ಇರುವ ಬ್ಯಾಡ್ಮಿಂಟನ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮತ್ರ್ಯರಾಜ ಟ್ರೋಫಿ ಸಂದರ್ಭದಲ್ಲಿ, ಕ್ರೀಡಾಕೂಟಕ್ಕೆ ಭೇಟಿ ನೀಡಿ ಸ್ಪೀಕರ್ ಯು ಟಿ ಖಾದರ್ ಬ್ಯಾಡ್ಮಿಂಟನ್ ಸಾಧಕರನ್ನು ಸನ್ಮಾನಿಸಿದರು
ಉಡುಪಿಯಲ್ಲಿ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಯು. ಟಿ ಖಾದರ್ ಅವರು ಕೆಲಕಾಲ ಬ್ಯಾಡ್ಮಿಂಟನ್ ಆಟವಾಡುವ ಮೂಲಕ ರಿಲ್ಯಾಕ್ಸ್ ಆದ್ರು. ‘ಇಲ್ಲಿನ ಅಜ್ಜರಕಾಡು ಬಳಿ ಇರುವ ಬ್ಯಾಡ್ಮಿಂಟನ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮತ್ರ್ಯರಾಜ ಟ್ರೋಫಿ ಸಂದರ್ಭದಲ್ಲಿ, ಕ್ರೀಡಾಕೂಟಕ್ಕೆ ಭೇಟಿ ನೀಡಿದ ಅವರು ಬ್ಯಾಡ್ಮಿಂಟನ್ ಸಾಧಕರನ್ನು ಸನ್ಮಾನಿಸಿದರು. ಕ್ರೀಡಾ ಸಂಯೋಜಕರಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಕಬಡ್ಡಿ ಪಂದ್ಯಾಟವನ್ನು ನಡೆಸುವಂತೆ ಸಲಹೆ ನೀಡಿದರು.





