ಶ್ರೀಮತಿ ಮಹೇಶ್ವರಿ ಗಂಡ ಗೋಪಾಲ ಹುಲಿಕಲ್ ಸಾ. ಶಾಸ್ತ್ರೀ ಚೌಕ ಶಹಾಬಾದ ಇವರ ಮನೆಯಲ್ಲಿ ಅತ್ತೆ ಮತ್ತು ಮಾವ ವರದಕ್ಷಿಣೆಗಾಗಿ ಪೀಡಿಸಿ ದೂರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಆರೋಪಿಸಿದ ಅವರು ನನ್ನ ಮನೆಯಲ್ಲಿ ಅತ್ತೆ ಮಾವ ನಾದಿನಿ ರಂಗಮ್ಮ ಇವರೆಲ್ಲರೂ ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು, ಮತ್ತು ಇವರೆಲ್ಲರೂ ನನ್ನ ಗಂಡನಿಗೆ ವರದಕ್ಕಿಣೆ ಕೇಳುವಂತೆ ಒತ್ತಾಯಿಸುತ್ತಿದ್ದರು. ಅದರಂತೆ ನನ್ನ ಗಂಡನೂಸಹ ದಿನನಿತ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ , ಸುಮಾರು ಸಲ ಹಲ್ಲೆಯನ್ನೂ ಸಹ ಮಾಡಿದ್ದಾರೆ, ನಂತರ ನನಗೆ ನೆಪ ಮಾಡಿ ಹೆತ್ತವರನ್ನು ಕರೆಯಿಸಿ ನೀನು ಕೆಲದಿನಗಳವರೆಗೆ ತವರುವನೆಗೆ ಕಳುಹಿಸಿ, ನಂತರ ನನಗೆ ಕರೆಯಲಿಕ್ಕೆ ಬಾರದೆ ಬೇರೊಂದು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.





