ವಿಜಯಪುರ ಜಿಲ್ಲೆಯಲ್ಲಿ ಕಡು ಬಿಸಿಲಿನ ತಾಪದಿಂದ ಹಾಗೂ ಭೀಕರ ಬರಗಾಲದಿಂದ ಜನರು ನೀರಿಗಾಗಿ ಪರಿತಪಿಸಿದ್ದರು.
ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಎಂ. ಬಿ. ಪಾಟೀಲರ ಮುಂದಾಲೋಚನೆಯಿಂದ ಹಾಗೂ ಸಚಿವರ ಮುತುವರ್ಜಿಯಿಂದಾಗಿ ನೀತಿ ಸಂಹಿತೆಯಲ್ಲಿಯೂ ಆದೇಶ ನೀಡಿದ ಪರಿಣಾಮ ಕೆನಾಲ್ ಮುಖಾಂತರ ಬೇಸಿಗೆಯಲ್ಲಿ ಬಬಲೇಶ್ವರದ ಕೆರೆ ಮತ್ತು ಹಳ್ಳಗಳಿಗೆ ನೀರು ಹರಿಸಲಾಗುತ್ತಿದೆ. ಜನ-ಜಾನುವಾರುಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೂ ಸಹ ಅನುಕೂಲವಾಗುತ್ತಿದೆ. ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕವಾಗಿದೆ





